ಅಂಬಲಪಾಡಿಯಲ್ಲಿ ಹಿರಿಯರ ನೆನಪು~2021

ಏ . 3 ಅಂಬಲಪಾಡಿಯಲ್ಲಿ ಹಿರಿಯರ ನೆನಪು 2021

ವಿದ್ಯಾವಾಚಸ್ಪತಿ ದಿವಂಗತ ಬನ್ನಂಜೆ ಗೋವಿಂದಾಚಾರ್ಯರಿಂದ ಸ್ಥಾಪಿತವಾದ ಈಶಾವಾಸ್ಯ ಪ್ರತಿಷ್ಠಾನ (ರಿ ಉಡುಪಿ – ಬೆಂಗಳೂರು ಇದರ ವತಿಯಿಂದ ಹಿರಿಯರ ನೆನಪು – _2021 ಸಂಸ್ಕೃತಿ ಸಂಗಮ ಕಾರ್ಯಕ್ರಮವು ಇದೇ ಬರುವ ದಿನಾಂಕ 3/4/2021 ಶನಿವಾರ ಸಂಜೆ 5.30 ಕ್ಕೆ ಅಂಬಲಪಾಡಿ ಜನಾರ್ದನ ಮಹಾಕಾಳಿ ದೇವಸ್ಥಾನದ ಬಯಲು ರಂಗಮಂದಿರದಲ್ಲಿ ನಡೆಯಲಿದೆ .

ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ದಿವ್ಯ ಸಾನ್ನಿಧ್ಯ ವಹಿಸಲಿರುವರು .
ಮುಖ್ಯ ಅಭ್ಯಾಗತರಾಗಿ ಕ್ಷೇತ್ರದ ಆಡಳಿತ ಧರ್ಮದರ್ಶಿ ಡಾ ನಿ ಬೀ ವಿಜಯ ಬಲ್ಲಾಳ , ಹಿರಿಯ ಚಿಂತಕ ಸಾಹಿತಿ ಅಂಬಾತನಯ ಮುದ್ರಾಡಿ ಭಾಗವಹಿಸುವರು .

ಪ್ರಸಿದ್ಧ ವಿದ್ವಾಂಸರಾದ ಡಾ ಉಡುಪಿ ರಾಮನಾಥ ಆಚಾರ್ಯ, ಮತ್ತು ಹೋಮಿಯೋಪತಿ ವೈದ್ಯ ಡಾ ಎಚ್ ವೇಂಕಟೇಶ್ ಬೆಂಗಳೂರು ಅವರಿಗೆ ಗೌರವ ಸಂಮಾನಿಸಲಾಗುವುದು .

ಇದೇ ಸಂದರ್ಭ ಪುರಂದರೋಪನಿಷತ್ತು ಬನ್ನಂಜೆ ಕಂಡಂತೆ ಮತ್ತು ತಲವಕಾರೋ ಪನಿಷತ್ ಬನ್ನಂಜೆ ಭಾಷ್ಯ ಸಹಿತ ಕೃತಿಗಳ ಲೋಕಾರ್ಪಣೆಯೂ ನಡೆಯಲಿದೆ .

ಸಭಾ ಕಾರ್ಯಕ್ರಮದ ಬಳಿಕ ಹಿರಿಯ ಯಕ್ಷಗಾನ ಭಾಗವತ ನಾರಾಯಣ ಶಬರಾಯ ಮತ್ತು ಅವರ ಸುಪುತ್ರಿ ಗಾರ್ಗಿ ಸುದೀಪ್ ಅವರಿಂದ ರಾಗಧಾರಾ ಯಕ್ಷ – ಭಕ್ತಿ – ಸುಗಮ ಸಂಗೀತ ಯುಗಳ ಗಾಯನ ನಡೆಯಲಿದೆ ಎಂದು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ .

 
 
 
 
 
 
 
 
 
 
 

Leave a Reply