ಹೋಟೆಲ್ ಲಲಿತ್ ಅಶೋಕ್ ಕಳೆ ಈಗ ಸಂಪೂರ್ಣ ಬದಲಾಗಿದೆ. ಅಲ್ಲಿ ಈಗ ಕನ್ನಡದ ಕಲರವ. ಪ್ರತಿಭಾ, ಕಾಯ್ಕಿಣಿ, ಬಾಗಿಲು.. ಹೀಗೆ ಎಷ್ಟೊಂದು ನಿಮ್ಮ ಕಿವಿಗೆ ಬೀಳುತ್ತದೆ. ಇದಕ್ಕೆ ಕಾರಣ ಪ್ರತಿಭಾ ನಂದಕುಮಾರ್.
ಜಯಂತ ಕಾಯ್ಕಿಣಿ ಅವರ ಬರಹಗಳಲ್ಲಿ ಇರುವ ಬಾಗಿಲುಗಳನ್ನು ಪ್ರತಿಭಾ ಇಣುಕಿ ನೋಡಿದ್ದಾರೆ. ಅರೆ! ಹೀಗೆಲ್ಲಾ ಒಬ್ಬ ಸಾಹಿತಿಯನ್ನು ನೋಡಬಹುದೇ ಎಂದು ಹುಬ್ಬೇರುವಂತೆ ಮಾಡಿದ್ದಾರೆ. ಕಾಯ್ಕಿಣಿ ಹಾಗೂ ಪ್ರತಿಭಾ ಬರಹಗಳು ಒಂದೇ ಕಾಲಕ್ಕೆ ಓದುಗರ ಮನಸ್ಸಿಗೆ ಲಗ್ಗೆ ಹಾಕಿತ್ತು. ಒಬ್ಬ ಸಾಹಿತಿ ಮತ್ತೊಬ್ಬ ಸಾಹಿತಿಯನ್ನು ಹೀಗೆ ಆತ್ಮೀಯವಾಗಿ ನೋಡುವ, ಅದನ್ನು ಅತ್ಯಂತ ಭಿನ್ನವಾಗಿ ಸಾಹಿತ್ಯಾಸಕ್ತರ ಮುಂದೆ ಇಡುವ ಪ್ರಯೋಗ ನೀವು ನೋಡಲೇಬೇಕು
ಬನ್ನಿ, ಟಿಕೆಟ್ ಖಂಡಿತಾ ಇಲ್ಲ..
ಚಿತ್ರಕಲಾ ಪರಿಷತ್ ಬಳಿ ಎಡವಿದರೆ ಹೋಟೆಲ್ ಅಶೋಕಾದಲ್ಲಿರುತ್ತೀರಿ
0 ಪ್ರತಿಕ್ರಿಯೆಗಳು