Connect with us

    LATEST NEWS

    ಚೈತ್ರಾ ವಂಚನೆ ಪ್ರಕರಣ: ವಜ್ರದೇಹಿ ಸ್ವಾಮೀಜಿಗೆ ಸಿಸಿಬಿ ನೋಟೀಸ್‌

    Published

    on

    ಮಂಗಳೂರು: ಚೈತ್ರಾ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ವಜ್ರದೇಹಿ ಸ್ವಾಮೀಜಿಗೆ ಬೆಂಗಳೂರು ಸಿಸಿಬಿ ಪೊಲೀಸರು ನೋಟಿಸ್ ನೀಡಿ ವಿಚಾರಣೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.


    ಆರೋಪಿ ಚೈತ್ರಾ ಉದ್ಯಮಿ ಗೋವಿಂದ ಬಾಬು ಪೂಜಾರಿ ವಿರುದ್ಧ ಜಾರಿ ನಿರ್ದೇಶಾನಲಯಕ್ಕೆ ಪತ್ರ ಬರೆದಿದ್ದರು. ಈ ಪತ್ರದಲ್ಲಿ ವಜ್ರದೇಹಿ ಮಠದ ಸ್ವಾಮೀಜಿ ಹೆಸರನ್ನು ಸಹ ಚೈತ್ರಾ ಪ್ರಸ್ತಾಪ ಮಾಡಿದ್ದರು. ಇದೀಗ ವಂಚನೆ ಪ್ರಕರಣ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಸ್ವಾಮೀಜಿಗೆ ನೋಟಿಸ್​ ನೀಡಿದ್ದಾರೆ. ಆದರೆ ನೋಟೀಸ್‌ ಬಂದ ಬಗ್ಗೆ ಸ್ವಾಮೀಜಿಗಳು ಈವರೆಗೆ ಅಧಿಕೃತವಾಗಿ ಹೇಳಿಕೆ ನೀಡಿಲ್ಲ.

    DAKSHINA KANNADA

    ಊಟವಾದ ನಂತರ ನಿದ್ರೆ ಬರುತ್ತದೆಯೇ..? ಈ ರೀತಿ ಮಾಡಿ ನೋಡಿ

    Published

    on

    ಮಂಗಳೂರು: ಊಟವಾದ ನಂತರ ತೂಕಡಿಕೆ ಸಾಮಾನ್ಯ. ಮಧ್ಯಾಹ್ನ ಹೊಟ್ಟೆ ತುಂಬಿದ ನಂತರ ನಿದ್ರೆ ಬಂದಂತಾಗಿ ಕೆಲಸದಲ್ಲಿ ಆಸಕ್ತಿಯೇ ಇರುವುದಿಲ್ಲ. ಆಫೀಸಿಗೆ ಹೋಗುವವರಿಗೆ ಇದರಿಂದ ಬಹಳ ಸಮಸ್ಯೆ, ಕಿರಿಕಿರಿ ಉಂಟಾಗುತ್ತದೆ. ಊಟದ ನಂತರದ ಆಲಸ್ಯವನ್ನು ಕಡಿಮೆ ಮಾಡಲು ಕೆಲವು ಸಲಹೆಗಳು ಇಲ್ಲಿವೆ. ಊಟವಾದ ನಂತರ ನಾವು ಆ್ಯಕ್ಟಿವ್ ಆಗಿರಬೇಕೆಂದರೆ ನಮ್ಮ ದಿನಚರಿಯಲ್ಲೂ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಆ ಬಗ್ಗೆ ಮಾಹಿತಿ ಇಲ್ಲಿದೆ.

    ಸಾಕಷ್ಟು ನೀರು ಕುಡಿಯಿರಿ:

    ಹೈಡ್ರೇಟೆಡ್ ಆಗಿರಲು ಮತ್ತು ನಿರ್ಜಲೀಕರಣವನ್ನು ಎದುರಿಸಲು ಊಟದ ನಂತರ ಸಾಕಷ್ಟು ನೀರು ಕುಡಿಯಿರಿ. ಇದು ಆಯಾಸದ ಭಾವನೆಗಳಿಗೆ ಕಾರಣವಾಗಬಹುದು. ದಿನವಿಡೀ ಕನಿಷ್ಠ 8 ರಿಂದ 10 ಗ್ಲಾಸ್ ನೀರನ್ನು ಕುಡಿದರೆ ಊಟದ ನಂತರ ನಿದ್ದೆ ಬರುವುದಿಲ್ಲ.

    ತಿಂಡಿ ತಿನ್ನಿ:

    ಊಟದ ನಡುವೆ ತ್ವರಿತ ಶಕ್ತಿಯ ವರ್ಧಕವನ್ನು ಒದಗಿಸಲು ತಾಜಾ ಹಣ್ಣುಗಳು, ನಟ್ಸ್ ಅಥವಾ ಪೌಷ್ಟಿಕಾಂಶದ ತಿಂಡಿಗಳನ್ನು ಸೇವಿಸಿ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸಲು ಮತ್ತು ಶಕ್ತಿಯ ಕುಸಿತವನ್ನು ತಡೆಯಲು ಪ್ರೋಟೀನ್ ಮತ್ತು ಫೈಬರ್‌ನಲ್ಲಿ ಹೆಚ್ಚಿನ ತಿಂಡಿಗಳನ್ನು ಆರಿಸಿ.

    ಸಮತೋಲಿತ ಆಹಾರವನ್ನು ಸೇವಿಸಿ:

    ನಿರಂತರ ಶಕ್ತಿಯನ್ನು ಒದಗಿಸಲು ಮತ್ತು ರಕ್ತದಲ್ಲಿನ ಸಕ್ಕರೆಯ ಏರಿಕೆ ತಡೆಗಟ್ಟಲು ನೇರ ಪ್ರೋಟೀನ್, ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳು ಮತ್ತು ಆರೋಗ್ಯಕರ ಕೊಬ್ಬುಗಳನ್ನು ಒಳಗೊಂಡಿರುವ ಸಮತೋಲಿತ ಊಟವನ್ನು ಆರಿಸಿಕೊಳ್ಳಿ. ತರಕಾರಿಗಳು, ಧಾನ್ಯಗಳು ಮತ್ತು ನೇರ ಮಾಂಸಗಳು ಅಥವಾ ಸಸ್ಯ ಆಧಾರಿತ ಪ್ರೋಟೀನ್‌ಗಳಂತಹ ಪೌಷ್ಟಿಕಾಂಶ ದಟ್ಟವಾದ ಆಹಾರಗಳನ್ನು ಸೇರಿಸಿ.

    ಊಟದ ನಂತರ ಸ್ವಲ್ಪ ನಡೆಯಿರಿ:

    ಪರಿಚಲನೆಯನ್ನು ಉತ್ತೇಜಿಸಲು ಮತ್ತು ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಕಚೇರಿ ಅಥವಾ ಹೊರಾಂಗಣದಲ್ಲಿ ಸ್ವಲ್ಪ ನಡೆಯುವ ಅಭ್ಯಾಸ ಇಟ್ಟುಕೊಳ್ಳಿ. ಲಘು ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ. ಇದು ಆಲಸ್ಯದ ಭಾವನೆಗಳನ್ನು ನಿವಾರಿಸಲು ಮತ್ತು ಜಾಗರೂಕತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

    Continue Reading

    LATEST NEWS

    ಗೋವಾ ವಿಮಾನ ನಿಲ್ದಾಣಕ್ಕೆ ಬಡಿದ ಸಿಡಿಲು; ರನ್ ವೇ ಗೆ ಹಾನಿ

    Published

    on

    ಪಣಜಿ : ಗೋವಾದ ಮನೋಹರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (MIA) ರನ್ ವೇ ಗೆ ಸಿಡಿಲು ಬಡಿದಿದೆ. ಪರಿಣಾಮ 6 ವಿಮಾನಗಳ ಮಾರ್ಗಗಳನ್ನು ಬದಲಾವಣೆ ಮಾಡಲಾಗಿದೆ. ಸಿಡಿಲು ಬಡಿದಿದ್ದರಿಂದ ರನ್ ವೇ ಅಂಚಿನ ದೀಪಗಳಿಗೆ ಹಾನಿಯುಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಉತ್ತರ ಗೋವಾದಲ್ಲಿರುವ ಮೋಪಾದಲ್ಲಿನ ವಿಮಾನ ನಿಲ್ದಾಣಕ್ಕೆ ಸಿಡಿಲು ಬಡಿದಿದೆ. ಬುಧವಾರ ಸಂಜೆ 5.15 ರ ಸುಮಾರಿಗೆ ಸಿಡಿಲು ಬಡಿದಿದೆ. ರನ್ ವೇ ಹಾನಿಯಾಗಿರುವ ಬಗ್ಗೆ ರಾತ್ರಿ 8 ಗಂಟೆ ಸುಮಾರಿಗೆ ಗಮನಕ್ಕೆ ಬಂದಿತು.

    ಎಂಐಎ ಎನ್ಒಟಿಎಎಂ (ನೊಟೀಸ್ ಟು ಏರ್ ಮನ್) ಪ್ರಕ್ರಿಯೆ ಕೈಗೊಂಡು ಸಮಸ್ಯೆಯನ್ನು ದುರಸ್ತಿ ಮಾಡಿದ್ದಾಗಿ ವಿಮಾನ ನಿಲ್ದಾಣ ಅಧಿಕಾರಿಗಳು ತಿಳಿಸಿದ್ದಾರೆ. ದುರಸ್ತಿ ಹಿನ್ನೆಲೆಯಲ್ಲಿ 6 ವಿಮಾನಗಳನ್ನು ಹತ್ತಿರದ ನಿಲ್ದಾಣಗಳಿಗೆ ಮಾರ್ಗ ಬದಲಾವಣೆ ಮಾಡಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಇದನ್ನೂ ಓದಿ : ಹೆಚ್ಚಾದ ಮಂಗನ ಕಾಯಿಲೆ, ಜನರಲ್ಲಿ ಆತಂಕ..! ಸರಕಾರದ ನಿರ್ಲಕ್ಷ್ಯಕ್ಕೆ ತೀವ್ರ ಆಕ್ರೋಶ

    ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ಪ್ರಾಮಾಣಿಕವಾಗಿ ವಿಷಾದಿಸುತ್ತೇವೆ. ಇಂತಹ ನೈಸರ್ಗಿಕ ವಿಕೋಪಗಳು ಮಾನವ ನಿಯಂತ್ರಣವನ್ನು ಮೀರಿವೆ ಎಂದು ವಿಮಾನ ನಿಲ್ದಾಣ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

     

    Continue Reading

    FILM

    ಕಂಟೆಂಟ್‌ ಸ್ಟಾರ್ ನಿಹಾರಿಕಾಗೆ ಒಲಿದು ಬಂತು ಅದೃಷ್ಟ..! ‘ಯಶ್’ ಜೊತೆ ವೀಡಿಯೋ ಮಾಡಿ ಹಿಟ್‌ ಆದ ನಿಹಾರಿಕಾ..

    Published

    on

    ಆಂಧ್ರಪ್ರದೇಶ/ಮಂಗಳೂರು:  ಯಾರ ಅದೃಷ್ಟ ಹೇಗೆ ಬದಲಾಗುತ್ತೆ ಗೊತ್ತಿಲ್ಲ.. ಅದೃಷ್ಟ ಅನ್ನೋದು ಯಾವುದೇ ಹಣ ಕೊಟ್ಟು ಪಡೆಯುವಂತದಲ್ಲ. ಅದು ತಾನಾಗಿಯೇ ಒಳಿದು ಬರಬೇಕು. ಇನ್ನು ಬಹಳಷ್ಟು ಜನ ಸೋಶಿಯಲ್ ಮೀಡಿಯಾವನ್ನು ತಮ್ಮ ಪ್ರತಿಭೆಗೆ ಪ್ಲಾಟ್‌ಫಾರ್ಮ್‌ ಆಗಿ ಮಾಡಿಕೊಂಡಿದ್ದಾರೆ. ಇದಕ್ಕೆ ಉತ್ತಮ ಉದಾಹರಣೆ ಅಂದ್ರೆ ನಿಹಾರಿಕಾ…

    niharika

    ಹೌದು.. ಈಕೆ ತನ್ನದೇ ಆದ ಯೂಟ್ಯೂಬ್‌ ಚಾನೆಲ್‌ವೊಂದರಲ್ಲಿ ಮಿಂಚುತ್ತಿದ್ದ ಹುಡುಗಿ. ಆಂಧ್ರ ಸೋಶಿಯಲ್ ಮೀಡಿಯಾ ಸ್ಟಾರ್  ನಿಹಾರಿಕಾ ಕೇವಲ ತೆಲುಗು  ಅಲ್ಲದೇ ಬಾಲಿವುಡ್‌ನಲ್ಲೂ ತಮ್ಮ ನಿಲುವನ್ನು ಕಂಡುಕೊಂಡಿದ್ದಾರೆ. ಸಿನೆಮಾಗಳ ಪ್ರಚಾರಕ್ಕಾಗಿ ತಮ್ಮ ವಿಭಿನ್ನ ವೀಡಿಯೋ ಕಂಟೆಂಟ್‌ ಮೂಲಕ ಜನರನ್ನು ರೀಚ್‌ ಮಾಡ್ತಾರೆ. ಅಲ್ಲದೆ ತೆಲುಗು ಸ್ಟಾರ್ ಮಹೇಶ್ ಬಾಬು ಜೊತೆ ಸಿನೆಮಾ ಪ್ರಚಾರಕ್ಕಾಗಿ ಒಂದು ವಿಡಿಯೋವನ್ನು ಮಾಡಿದ್ದು ಸಖತ್ ವೈರಲ್ ಆಗಿತ್ತು. ಬಾಲಿವುಡ್‌ ನ ಕರೀನಾ ಕಪೂರ್ ಸೇರಿದಂತೆ ಕೆಜಿಎಫ್‌ ಮೂವಿ ರಿಲೀಸ್‌ ಸಮಯದಲ್ಲೂ ಯಶ್ ಜೊತೆ ವೀಡಿಯೋ ಕಂಟೆಂಟ್‌ ಮಾಡಿ ಹಂಚಿಕೊಂಡಿದ್ದರು.

    ಒಲಿದು ಬಂತು ಅದೃಷ್ಟ:

    ಇದೀಗ ನಿಹಾರಿಕಾಗೆ ಅದೃಷ್ಟ ಒಳಿದು ಬಂದಿದೆ. ಇನ್ನು ನಿಹಾರಿಕಾಗೆ ಎಷ್ಟರ ಮಟ್ಟಿಗೆ ಬೇಡಿಕೆ ಹೆಚ್ಚಾಗಿ ಅಂದ್ರೆ ನ್ಯಾಷನಲ್ ಸ್ಟಾರ್ ಯಶ್ ರವರ ಸಿನೆಮಾಗೆ ಪ್ರಮೋಷನ್‌ ನೀಡಿರುವುದೇ ಇದಕ್ಕೆ ಸಾಕ್ಷಿ. ಆ ಸಮಯದಲ್ಲಿ ಈ ವೀಡಿಯೋ ಕೂಡಾ ಸಖತ್ ವೈರಲ್ ಆಗಿತ್ತು.  ಇದೀಗ ಕಂಟೆಂಟ್‌ ಕ್ರಿಯೇಟರ್‌ ನಿಂದ ಸಿನೆಮಾ ಹಿರೋಯಿನ್‌ ಆಗಿ ಚಿತ್ರರಂಗಕ್ಕೆ ಹೆಜ್ಜೆ ಇಡುತ್ತಿದ್ದಾರೆ. ನಿಹಾರಿಕಾ  ತಮ್ಮ ಚೊಚ್ಚಲ ಸಿನೆಮಾವನ್ನು ತಮಿಳು ಚಿತ್ರದ ಮೂಲಕ ಆರಂಭಿಸುತ್ತಿದ್ದಾರೆ.

    Read More..; ಡಿ ಬಾಸ್ ಫ್ಯಾನ್ಸ್ ಗೆ ಗುಡ್ ನ್ಯೂಸ್; ‘ಡೆವಿಲ್’ ಚಿತ್ರ ಬಿಡುಗಡೆಗೆ ದಿನಾಂಕ ಫಿಕ್ಸ್

    ದಕ್ಷಿಣದ ಪ್ರಖ್ಯಾತ ನಿರ್ಮಾಣ ಸಂಸ್ಥೆ ಲೈಕಾ ಈ ಸಿನೆಮಾವನ್ನು ನಿರ್ಮಾಣ ಮಾಡುತ್ತಿದೆ. ಆಕಾಶ್ ಭಾಸ್ಕರ್‌ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. ಇನ್ನೂ ಸಿನೆಮಾದಲ್ಲಿ ನಿಹಾರಿಕಾಳಿಗೆ ಅಥರ್ವ ಜೋಡಿಯಾಗಲಿದ್ದಾರೆ.

    ಈ ಸಿನೆಮಾಗೆ ಇನ್ನೂ ಹೆಸರು ಫೈನಲ್‌ ಆಗಿಲ್ಲ. ಆದರೆ ಈ ಸಿನೆಮಾ ಪಕ್ಕಾ ಹಾಸ್ಯ ಪ್ರದಾನವಾಗಿದ್ದು, ಪ್ರಣಯ, ಹಾಸ್ಯ, ಭಗ್ನ ಪ್ರೇಮ ಹಾಗೂ ರೋಡ್‌ ಟ್ರಿಪ್‌ಗಳನ್ನು ಒಳಗೊಂಡಿರುತ್ತದೆ. ಚಿತ್ರದ ಪ್ರಿ ಪ್ರೊಡಕ್ಷನ್ ಆರಂಭವಾಗಿದ್ದು, ಶೀಘ್ರದಲ್ಲಿಯೇ ಚಿತ್ರದ ಮುಹೂರ್ತ ಆಗಲಿದೆ.

    Continue Reading

    LATEST NEWS

    Trending