Connect with us

    LATEST NEWS

    ಮಂಗಳೂರು: ದೈವಸ್ಥಾನದ ಕಾಣಿಕೆ ಡಬ್ಬಿ ಕಳವು

    Published

    on

    ಮಂಗಳೂರು: ದೈವಸ್ಥಾನಕ್ಕೆ ತಡರಾತ್ರಿ ನುಗ್ಗಿದ ಕಳ್ಳರು ಮೂರು ಕಾಣಿಕೆ ಡಬ್ಬಿಯಲ್ಲಿದ್ದ ಸುಮಾರು 15 ಸಾವಿರ ರೂ. ನಗದು ಕಳವುಗೈದ ಘಟನೆ ಮಂಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.


    ಮಂಗಳೂರು ಹೊರವಲಯದ ನೀರುಮಾರ್ಗ ಶಾಂತಿಗುರಿ ಕೊರ್ದಬ್ಬು, ತನ್ನಿಮಾನಿಗ, ರಾಹುಗುಳಿಗ ದೈವಸ್ಥಾನಕ್ಕೆ ನುಗ್ಗಿ ಕಳವುವೈದಿದ್ದಾರೆ. ಶನಿವಾರ ರಾತ್ರಿ 7 ಗಂಟೆ ಸುಮಾರಿಗೆ ದೈವಸ್ಥಾನದ ಚಾಕರಿಯವರು ದೀಪವಿಟ್ಟು ಬಾಗಿಲು ಹಾಕಿ ಹೋಗಿದ್ದರು. ಭಾನುವಾರ ಬೆಳಗ್ಗೆ ಬಂದು ನೋಡುವಾಗ ಕಳವು ಕೃತ್ಯ ನಡೆದಿರುವುದು ಬೆಳಕಿಗೆ ಬಂದಿದೆ.
    ಮುಖ್ಯ ರಸ್ತೆ ಬದಿಯಲ್ಲಿದ್ದ ಕಾಣಿಕೆ ಡಬ್ಬಿ ಹಾಗೂ ದೈವಸ್ಥಾನದ ಹೊರಗಡೆಯಿದ್ದ ಕಾಣಿಕೆ ಡಬ್ಬಿಯನ್ನು ಕಳವುಗೈದಿದ್ದಾರೆ. ಬಳಿಕ ಬಾಗಿಲು ಮುರಿದು ಒಳ ಪ್ರವೇಶಿಸಿದ ಕಳ್ಳರು ದೈವಸ್ಥಾನದ ಒಳಗಿದ್ದ ಕಾಣಿಕೆ ಡಬ್ಬಿಯ ಬೀಗ ಮುರಿದು ನಗದು ಕಳವುಗೈದಿದ್ದಾರೆ.
    ಚಿನ್ನ ಬೆಳ್ಳಿ ಬಿಟ್ಟು ಹೋದರು
    ದೈವಸ್ಥಾನದ ಮೂರು ಕಾಣಿಕೆ ಡಬ್ಬಿಗಳನ್ನು ಕಳವುಗೈದ ಕಳ್ಳರು ದೈವಸ್ಥಾನದ ಒಳಗಿದ್ದ 7 ಪವನ್ ಚಿನ್ನದ ನಾಲಗೆ, ಬೆಳ್ಳಿಯ ಸೊತ್ತುಗಳು, ಮೊಗ ಸೇರಿದಂತೆ ಇತರ ವಸ್ತುಗಳನ್ನು ಬಿಟ್ಟು ಹೋಗಿದ್ದಾರೆ. ದೈವಸ್ಥಾನದಲ್ಲಿ ಹಾಕಲಾದ ಸಿಸಿ ಕ್ಯಾಮೆರಾ ಕೆಟ್ಟು ಹೋಗಿದ್ದು, ಕಳವು ಕೃತ್ಯ ಯಾವುದೇ ಚಹರೆ ದಾಖಲಾಗಿಲ್ಲ. ಇದೇ ರಸ್ತೆಯ ಬೇರೆ ಎರಡು ಸಿಸಿ ಕ್ಯಾಮೆರಾವನ್ನು ಪರಿಶೀಲಿಸಲಾಗುತ್ತಿದೆ.

    DAKSHINA KANNADA

    ವಾಟ್ಸ್​ಆ್ಯಪ್‌ನಲ್ಲಿ ವಿಡಿಯೋ ಸ್ಟೇಟಸ್ ಹಾಕುವವರಿಗೆ ಸಿಹಿ ಸುದ್ದಿ

    Published

    on

    ಮಂಗಳೂರು: ಜನಪ್ರಿಯ ಮೆಟಾ ಒಡೆತನದ ವಾಟ್ಸ್​ಆ್ಯಪ್‌ ತನ್ನ ಬಳಕೆದಾರರಿಗೆ ಸಿಹಿ ಸುದ್ದಿ ನೀಡಿದೆ. ಸ್ಟೇಟಸ್‌ ಅವಧಿಯನ್ನ ಇದೀಗ ಒಂದು ನಿಮಿಷಕ್ಕೆ ಏರಿಕೆ ಮಾಡಿದೆ.

    ವಿಶ್ವದಾದ್ಯಂತ ಬಹುಸಂಖ್ಯಾ ಬಳಕೆದಾರರನ್ನು ಹೊಂದಿರುವ ಎಲ್ಲರ ನೆಚ್ಚಿನ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್​ಆ್ಯಪ್ ಹೊಸ ಹೊಸ ಫೀಚರ್ಸ್​​ ಪರಿಚಯಿಸುತ್ತಿದೆ​. ಅದರೀಗ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ವಾಟ್ಸ್​ಆ್ಯಪ್ ಸ್ಟೇಟಸ್‌ನಲ್ಲಿ ಪ್ರಮುಖ ಬದಲಾವಣೆ ತಂದಿದೆ. ಅದರಂತೆ ಸ್ಟೇಟಸ್​ ವಿಡಿಯೋ ಮಿತಿಯನ್ನು ಏರಿಕೆ ಮಾಡಿದೆ.

    ಹೌದು. ವಾಟ್ಸ್​ಆ್ಯಪ್​ ಬಳಸುವವರು ಇದೀಗ 1 ನಿಮಿಷ ಅವಧಿಯ ವಿಡಿಯೋಗಳನ್ನು ಸ್ಟೇಟಸ್‌ನಲ್ಲಿ ಅಪ್ಲೋಡ್​ ಮಾಡಬಹುದಾಗಿದೆ. ಆ ಮೂಲಕ ಧೀರ್ಘ ಅವಧಿಯ ವಿಡಿಯೋ ಹಂಚಿಕೊಳ್ಳಬಹುದಾಗಿದೆ.

    ಅಂದಹಾಗೆಯೇ ವಾಟ್ಸ್​ಆ್ಯಪ್​ನಲ್ಲಿ​ ಈ ಮೊದಲು 30 ಸೆಕೆಂಡ್‌ಗಳ ವಿಡಿಯೋವನ್ನು ಸ್ಟೇಟಸ್‌ ಹಾಕಿಕೊಳ್ಳಬಹುದಾಗಿತ್ತು. ಆದರೀಗ ಅವಧಿಯನ್ನು ಹೆಚ್ಚಿಸಿದೆ. ಆಂಡ್ರಾಯ್ಡ್ ಆವೃತ್ತಿ 2.24.7.6 ವರ್ಷನ್ ಅಪ್‌ಡೇಟ್‌ ಮಾಡುವ ಮೂಲಕ ನೂತನ ಫೀಚರ್ಸ್​ ಬಳಕೆಗೆ ಸಿಗಲಿದೆ. ಇನ್ನು ಐಫೋನ್ ಬಳಕೆದಾರರು iOS 24.10.10.74ಗೆ ಅಪ್‌ಡೇಟ್‌ ಮಾಡುವ ಮೂಲಕ ಹೊಸ ಫೀಚರ್‌ ಬಳಸಬಹುದಾಗಿದೆ.

    Continue Reading

    LATEST NEWS

    ಇನ್ಮುಂದೆ ಪೆಟ್ರೋಲ್, ಡೀಸೆಲ್ ಇಲ್ಲದೆ ರಸ್ತೆಯಲ್ಲೇ ವಾಹನ ನಿಂತರೆ ಚಾಲಕರ ವಿರುದ್ಧ ಕೇಸ್!

    Published

    on

    ಬೆಂಗಳೂರು: ಇನ್ಮುಂದೆ ಪೆಟ್ರೋಲ್, ಡಿಸೇಲ್ ಇಲ್ಲದೆ ರಸ್ತೆಯಲ್ಲಿ ವಾಹನ ನಿಲ್ಲಿಸಿದರೂ ಸಹ ವಾಹನ ಚಾಲಕರ ಮೇಲೆ ಪ್ರಕರಣ ದಾಖಲಾಗಲಿದೆ. ಈ ಕುರಿತು ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ.

    ಪ್ರಮುಖವಾಗಿ ನಗರದ ಸಂಚಾರ ದಟ್ಟಣೆ ರಸ್ತೆಗಳಲ್ಲಿ ವಾಹನ ನಿಂತರೆ ವಾಹನಗಳ ಮಾಲೀಕರ ಮೇಲೆ ಪ್ರಕರಣ ಹಾಕಲು ತೀರ್ಮಾನಿಸಲಾಗಿದೆ. ಹೆಬ್ಬಾಳ, ಏರ್ಪೋರ್ಟ್ ರಸ್ತೆ, ಗೊರಗುಂಟೆಪಾಳ್ಯ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಈ ನಿಯಮ ಅನ್ವಯವಾಗಲಿದೆ.

    ಸಂಚಾರ ವಿಭಾಗ ಜಂಟಿ ಪೊಲೀಸ್ ಆಯುಕ್ತರಿಂದ ಸ್ಪಷ್ಟನೆ

    ವಾಹನದಲ್ಲಿ ಪೆಟ್ರೋಲ್-ಡೀಸೆಲ್ ಎಷ್ಟಿದೆ ಎಂಬ ಮಾಹಿತಿ ಚಾಲಕರಿಗೆ ಗೊತ್ತಿರುತ್ತದೆ. ತೈಲ ಕಡಿಮೆ ಇದ್ದ ಕೂಡಲೇ ವ್ಯವಸ್ಥೆ ಮಾಡಿಕೊಳ್ಳಬಹುದು. ಆದರೆ ಪೆಟ್ರೋಲ್, ಡಿಸೇಲ್ ಇಲ್ಲ ಎಂದು ನಡು ರಸ್ತೆಯಲ್ಲಿ ಗಾಡಿ ನಿಂತರೆ ಪ್ರಕರಣ ಹಾಕಿಸಿಕೊಳ್ಳಬೇಕಾಗುತ್ತದೆ ಎಂದು ಸಂಚಾರ ವಿಭಾಗ ಜಂಟಿ ಪೊಲೀಸ್ ಆಯುಕ್ತ ಎಂ ಎನ್ ಅನುಚೇತ್ ಸ್ಪಷ್ಟನೆ ನೀಡಿದ್ದಾರೆ.

    Continue Reading

    FILM

    ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಯಿಂದ ಹೊರನಡೆದ ನಟಿ ನೇತ್ರಾ ಜಾಧವ್; ತೆಲಂಗಾಣದಲ್ಲಿ ಯಕ್ಷಗಾನ ಮೂಲಕ ಗಮನ ಸೆಳೆದ ನಟಿ!

    Published

    on

    ಬೆಂಗಳೂರು : ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಶ್ರೀರಸ್ತು ಶುಭಮಸ್ತು’ ಆರಂಭದಿಂದಲೂ ಜನಪ್ರಿಯವಾಗಿದೆ. ಹಿರಿಯ ನಟಿ ಸುಧಾರಾಣಿ ಈ ಧಾರಾವಾಹಿಯ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅಜಿತ್ ಹಂದೆ, ಚಂದನ ರಾಘವೇಂದ್ರ, ಲಾವಣ್ಯ ಮೊದಲಾದವರು ಧಾರಾವಾಹಿಯಲ್ಲಿ ಪಾತ್ರವಾಗಿದ್ದಾರೆ. ಧಾರಾವಾಹಿ ಅಂದ್ಮೇಲೆ ವಿಲನ್ ಇರಲೇಬೇಕಲಾ…ನಾಯಕಿ ಹೇಗೆ ಧಾರಾವಾಹಿಗಳಲ್ಲಿ ಮಿಂಚುತ್ತಾರೋ ಖಳನಾಯಕಿಯೂ ಅಷ್ಟೇ ಖ್ಯಾತರಾಗುತ್ತಾರೆ. ಹಾಗೆಯೇ ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ‘ಶಾರ್ವರಿ’ ಪಾತ್ರ ಮಿಂಚುತ್ತಿದೆ.


    ‘ಶಾರ್ವರಿ’ ಪಾತ್ರದಲ್ಲಿ ನಟಿಸಿದ್ದ ನೇತ್ರಾ ಜಾಧವ್ ಗಮನ ಸೆಳೆದಿದ್ದರು. ಆದರೆ, ಅವರು ಧಾರಾವಾಹಿಯಿಂದ ಹೊರಬಂದಿದ್ದಾರೆ. ಇದರಿಂದ ಅವರ ಅಭಿಮಾನಿಗಳಿಗೆ ಬೇಸರವಾಗಿದೆ. ತನ್ನ ಅಭಿನಯದಿಂದ ಗಮನ ಸೆಳೆಯುತ್ತಿದ್ದ ಸಹಜ ಸುಂದರಿ ನೇತ್ರಾ ಧಾರಾವಾಹಿಯಿಂದ ಹೊರನಡೆದಿದ್ದು, ಆ ಜಾಗಕ್ಕೆ ಸಪ್ನ ದೀಕ್ಷಿತ್ ಆಗಮಿಸಿದ್ದಾರೆ.

    ಗಮನ ಸೆಳೆದ ಯಕ್ಷಗಾನ ನೃತ್ಯ:


    ಶ್ರೀರಸ್ತು ಶುಭಮಸ್ತು ಧಾರಾವಾಹಿಯಿಂದ ಹೊರಬಂದ ನೇತ್ರಾ ತೆಲಂಗಾಣದ ಶೋವೊಂದರಲ್ಲಿ ಮಿಂಚಿದ್ದಾರೆ. ಅವರು ಯಕ್ಷಗಾನ ನೃತ್ಯ ಮಾಡಿ ಹುಬ್ಬೇರಿಸುವಂತೆ ಮಾಡಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾದಲ್ಲಿ ನೃತ್ಯದ ವೀಡಿಯೋ ಹಂಚಿಕೊಂಡಿದ್ದಾರೆ. ತೆಲಂಗಾಣದಲ್ಲಿ ಕರ್ನಾಟಕದ ನೃತ್ಯ ಶೈಲಿಯನ್ನು ಪ್ರದರ್ಶನ ಮಾಡಲು ಬಹಳ ಸಂತೋಷವಾಯಿತು ಎಂದು ಬರೆದುಕೊಂಡಿದ್ದಾರೆ.

    ಇದನ್ನೂ ಓದಿ : ಅಭಿಮಾನಿಗಳಿಗೆ ಮತ್ತೊಂದು ಗುಡ್‌ನ್ಯೂಸ್ ಕೊಟ್ಟ ರಾಧಿಕಾ ಪಂಡಿತ್

    ಕನ್ನಡ ಮಾತ್ರವಲ್ಲದೇ, ತೆಲುಗು ಧಾರಾವಾಹಿಗಳಲ್ಲೂ ನೇತ್ರಾ ನಟಿಸಿದ್ದಾರೆ. ತೆಲುಗು ಧಾರಾವಾಹಿ ‘ರಾವೋಯಿ ಚಂದಮಾಮ’ದಲ್ಲಿ ಇಂದ್ರಸೇನಾ ಪಾತ್ರದಲ್ಲಿ ನೇತ್ರಾ ಗಮನ ಸೆಳೆದಿದ್ದಾರೆ.

    ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿ ಮೊದಲು ನೇತ್ರಾ ‘ರಥಸಪ್ತಮಿ’ ಧಾರಾವಾಹಿಯಲ್ಲಿ ನಟಿಸಿದ್ದರು. ಈ ಧಾರಾವಾಹಿಯಲ್ಲಿ ಸುಧಾರಾಣಿಯವರ ತಂಗಿಯ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದರು. ನಂತರ ಜೀ ಕನ್ನಡದ ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಯಲ್ಲಿ ಸುಧಾರಾಣಿ ವಿರುದ್ಧ ಖಳನಾಯಕಿ ಪಾತ್ರದಲ್ಲಿ ಅವರು ಜನಮನ ಗೆದ್ದಿದ್ದರು.

    ಇದೀಗ ಧಾರಾವಾಹಿ ತೊರೆದಿದ್ದು, ಅವರು ಮುಂದೆ ಧಾರಾವಾಹಿಯಲ್ಲಿ ನಟಿಸುತ್ತಾರಾ? ಅವರ ಮುಂದಿನ ಯೋಜನೆ ಏನು? ಅನ್ನೋದನ್ನು ಕಾದು ನೋಡಬೇಕಿದೆ.

    Continue Reading

    LATEST NEWS

    Trending