ಹೊನ್ನಾವರ : ಆಧುನಿಕ ಯುಗದಲ್ಲಿ ವೈದ್ಯಕೀಯ ಸೇವಾ ಸಂಸ್ಥೆಗಳು, ಉಪಕರಣಗಳು ಹೆಚ್ಚಿವೆ. ಇದರ ಜೊತೆಗೆ ಮಾನವೀಯತೆ ಮುಖ್ಯವಾದಾಗ ಎಲ್ಲರಿಗೂ ಆರೋಗ್ಯ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ ಎಂದು ಸೇಂಟ್ ಇಗ್ನೇಷಿಯಸ್ ಸಮೂಹ ಆರೋಗ್ಯ ಸಂಸ್ಥೆಗಳ ನಿರ್ದೇಶಕಿ ರೆ.ಸಿ. ಮಾರಿಯಾ ಗೊರಟ್ಟಿ ಹೇಳಿದರು.
ಅವರು ಇಂದು ಮಂಗಳೂರಿನ ಸಿಎಡಿ ಇವರ ಪ್ರೊಜೆಕ್ಟ್ ಪುನರುಜ್ಜೀವನ ಯೋಜನೆಯ ಅಂಗವಾಗಿ ಉಚಿತವಾಗಿ ಇಸಿಜಿ ಮಾಡಲು ದೇಣಿಗೆಯಾಗಿ ಬಂದ 60ಸಾವಿರ ರೂಪಾಯಿ ಮೌಲ್ಯ ಇಸಿಜಿ ಉಪಕರಣವನ್ನು ಸ್ವೀಕರಿಸಿ, ಮಾತನಾಡಿದರು. ತಾವು ಖ್ಯಾತ ಆಸ್ಪತ್ರೆಯ ಮುಖ್ಯ ಹೃದಯ ವೈದ್ಯರಾಗಿದ್ದರೂ ಗ್ರಾಮೀಣ ಭಾಗದ ಜನತೆಗೆ ತುರ್ತು ಹೃದಯದ ಚಿಕಿತ್ಸೆಗೆ ಅನುಕೂಲವಾಗಲು ಗ್ರಾಮೀಣ ಭಾಗದ ವೈದ್ಯರಿಗೆ, ವೈದ್ಯಕೀಯ ಸಂಸ್ಥೆಗಳಿಗೆ ಈ ಯೋಜನೆ ಅನ್ವಯ ಇಸಿಜಿ ಉಪಕರಣವನ್ನು ದಾನವಾಗಿ ಕೊಡಿಸುತ್ತಿರುವ ಡಾ. ಪದ್ಮನಾಭ ಕಾಮತ್ ಮಾನವೀಯ ಕಳಕಳಿಯಿಂದ ಈ ಕೆಲಸ ಮಾಡುತ್ತಿದ್ದಾರೆ. ಇಸಿಜಿ ವರದಿಯನ್ನು ವಾಟ್ಸ್ಪ್ ಮೂಲಕ ಪಡೆದು ತಜ್ಞ ಸಲಹೆಯನ್ನು ನೀಡುವ ಮುಖಾಂತರ ಗ್ರಾಮೀಣ ವೈದ್ಯರಿಗೆ ರೋಗಿಗಳನ್ನು ಉಳಿಸಿಕೊಳ್ಳಲು ಸಹಾಯಕವಾಗುತ್ತದೆ. ಇವರ ಸಲಹೆ ಪಡೆದು ಎಲ್ಲಿ ಬೇಕಾದರೂ ಚಿಕಿತ್ಸೆ ಪಡೆಯಬಹುದು ಎಂಬುದು ದೊಡ್ಡ ಗುಣ ಎಂದು ಅವರ ವಾಟ್ಸಪ್ ಬಳಗಕ್ಕೆ ಶುಭಕೋರಿದರು.
ಮೆಡಿಕಲ್ ಡೈರೆಕ್ಟರ್ ಸಿ. ಡಾ. ಆ್ಯನ್ರಿಟಾ, ಸೆಕ್ರೆಟರಿ ಸಿ. ಲೀನಾ, ಹೃದಯ ವೈದ್ಯ ಡಾ. ಆಶಿಕ್ ಹೆಗಡೆ, ಸಾರ್ವಜನಿಕ ಸಂಪರ್ಕಾಧಿಕಾರಿ ಆ್ಯಂಟನಿ ಮತ್ತು ಆದಿತ್ಯ ಎಂಟರ್ಪ್ರೈಸಸ್ ಪ್ರತಿನಿಧಿಗಳು ಉಪಸ್ಥಿತರಿದ್ದರು.
Leave a Comment